Wednesday 16 December 2020

ದೀಕ್ಷಾ…ಎಂಬ ದೀಕ್ಷೆ

ಸೃಜಿಸುವ ಕಾರ್ಯವೇ ಶ್ರದ್ಧೆಯ ಪ್ರತೀಕ.  ಎಷ್ಟು ಶ್ರದ್ಧೆಯೋ ಅಷ್ಟೂ ಪ್ರತಿಫಲ. ಆ ಪ್ರತಿಫಲವೂ ಸಾರ್ವಕಾಲಿಕ, ಸಾರ್ವತ್ರಿಕ, ಸಾಮೂಹಿಕ ಮನ್ನಣೆಗೆ ಅರ್ಹ. ಅಂತಹ ಸೃಜಿಸುವ ಕಾರ್ಯಗಳು ಪದೇ ಪದೇ ನಮ್ಮ ಶಿಕ್ಷಣ ಇಲಾಖೆಯಲ್ಲೂ ಸಹ ನಡೆಯುತ್ತಿರುತ್ತವೆ. ಹೊಸ ಹೊಸ ತರಬೇತಿಗೆ ಹೊಸ ಸಾಹಿತ್ಯ ರಚನೆ, ಪಠ್ಯಕ್ರಮಗಳಿಗೆ ತಕ್ಕ ಪಠ್ಯ ರಚನೆ ಹೀಗೆ.. ಒಂದಿಲ್ಲೊಂದು ಸೃಜನಶೀಲ ಕಾರ್ಯಗಳಿಗೆ ರಾಜ್ಯ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆ ಸದಾ ತೆರೆದ ಬಾಗಿಲು.


ಅಂತೆಯೇ ದೀಕ್ಷಾ(DIKSHA) ಎಂಬ ವೇದಿಕೆಯಡಿಯಲ್ಲಿ ಹಲವು ಪಠ್ಯ ಸಂಪನ್ಮೂಲಗಳನ್ನು ಸೃಜಿಸುವ ಕಾರ್ಯವು ರಾಜ್ಯದ ಎಲ್ಲಾ ಡಯಟ್ ಗಳಿಗೂ ಹಂಚಿಕೆ ಮಾಡಲಾಗಿತ್ತು. ಭಾಷಾ ವಿಷಯಗಳು, ಕೋರ್ ವಿಷಯಗಳು ಸೇರಿದಂತೆ ಹಲವು ಪಾಠಗಳನ್ನು ನಮ್ಮ ಮೈಸೂರು ಡಯಟ್ ಗೂ ಸಹ ನೀಡಲಾಗಿತ್ತು.


  • ಕ್ರಿಯೋಯೋಜನೆ
  • ವಿಷಯ ಶಿಕ್ಷಕರ  ತಂಡ ರಚನೆ
  • ಪಾಠಗಳ ಹಂಚಿಕೆ
  • ಪ್ರತಿ ಘಟಕದ ಹಂಚಿಕೆ
  • ನಾವಿನ್ಯತೆಯ ಪ್ರಯೋಗ
  • ಪ್ರಾತ್ಯಕ್ಷತೆ ಕಾರ್ಯ
  • ಸೃಜನ ಸಪ್ತಾಹ(7ದಿನ ಸತತ ಕಾರ್ಯ
  • ಹೀಗೆ ಪ್ರತಿ ವಿಷಯ / ಪ್ರತಿ ಪಾಠಕ್ಕೆ ಹೊಂದಾಣಿಕೆಯಾಗುವ ಇ-ಸಂಪನ್ಮೂಲಗಳನ್ನು (ವಿಡಿಯೋ, mind map / concept map, ಪೂರಕ ಕಲಿಕಾ ಸಂಪನ್ಮೂಲಗಳು, ಗ್ರಾಫಿಕ್ಸ್ ಮತ್ತು ಚಿತ್ರಗಳು, ಪಾಠಯೋಜನೆ, ಕಲಿಕಾ ಫಲಗಳು, ಆದ್ಯತಾ ಪರಿಕಲ್ಪನೆಗಳು, ನಾವೀನ್ಯ ಬೋದನಾ ಕ್ರಮಗಳು, ಪಠ್ಯ ಸಂಪನ್ಮೂಲಗಳು…….ಇತ್ಯಾದಿ) ಸೃಜಿಸಲಾಗಿದೆ.
ಹಂತ ಹಂತವಾಗಿ ಯಶಸ್ವಿಯಾಗಿ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ನೋಡಲ್‌ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀ ರವರು. ಏಳು ವಿಷಯಗಳಲ್ಲಿ ಒಟ್ಟು 69 ಸಂಪನ್ಮೂಲ ಶಿಕ್ಷಕರಿದ್ದರು. ಇವರೆಲ್ಲರೂ ಸೇರಿ ಒಟ್ಟು 314 ಸಂಪನ್ಮೂಲಗಳನ್ನು ಸೃಜಿಸಿದರು. ಒಂದೊಂದು ವಿಭಿನ್ನ. ಒಂದೊಂದು ವಿಶಿಷ್ಟ. ಹೊಸ ಆವಿಷ್ಕಾರಗಳಿಗೆ ಈ ವೇದಿಕೆ ಸಾಕ್ಷಿಯಾಯಿತು. ಈ ಸಂಪನ್ಮೂಲ ವ್ಯಕ್ತಿಗಳೆಲ್ಲರನ್ನೂ ಒಟ್ಟುಗೂಡಿಸಿ ಅವರನ್ನು ತಿದ್ದುವ, ತೀಡುವ ಕಾರ್ಯ ನಿರ್ವಹಿಸುತ್ತಲೇ ಅವರನ್ನು ಹುರಿದುಂಬಿಸಿ ವೇದಿಕೆಯಲ್ಲಿ ಮೈಸೂರಿನ ಡಯಟ್‌ ನ ಸ್ಥಾನವನ್ನು ಗಟ್ಟಿಗೊಳಿಸಿದವರು ನೋಡಲ್‌ ಅಧಿಕಾರಿಗಳು. 

No comments:

Post a Comment